ಶ್ರೀರಂಗಂ ಗೋಪಾಲರತ್ನಂ (೧೯೩೯ - ೧೬ ಮಾರ್ಚ್ ೧೯೯೩) ಒಬ್ಬ ಭಾರತೀಯ ಶಾಸ್ತ್ರೀಯ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕ. ಕೂಚಿಪುಡಿ, ಯಕ್ಷಗಾನ, ಜಾವಳಿ ಮತ್ತು ಯೆಂಕಿ ಪಟಾಲುಗಳ ನಿರೂಪಣೆಯಲ್ಲಿ ಅವರು ಗುರುತಿಸಿಕೊಂಡಿದ್ದರು . ಅವರು ವಿಜಯನಗರ ಜಿಲ್ಲೆಯ ಪುಷ್ಪಗಿರಿಯಲ್ಲಿ ವರದಾಚಾರಿ ಮತ್ತು ಸುಭದ್ರಮ್ಮ ದಂಪತಿಗಳಿಗೆ ಜನಿಸಿದರು. == ಸಂಗೀತ == ಅವರು ಕವಿರಾಯುನಿ ಜೋಗಾ ರಾವ್ ಮತ್ತು ಡಾ. ಶ್ರೀಪಾದ ಪಿನಾಕಪಾಣಿಯವರಲ್ಲಿ ಸಂಗೀತದಲ್ಲಿ ತರಬೇತಿ ಪಡೆದರು. ಅವರು ೧೯೫೬ ರಲ್ಲಿ ಸಂಗೀತದಲ್ಲಿ ಡಿಪ್ಲೊಮಾ ಪಡೆದರು. ಬಾಲ ಪ್ರತಿಭೆಯಾಗಿದ್ದ ಈಕೆ ಹರಿಕಥೆಗಳನ್ನೂ ನಡೆಸಿದ್ದರು. ಅವರು ಹೈದರಾಬಾದ್‌ನ ಸರ್ಕಾರಿ ಸಂಗೀತ ಕಾಲೇಜಿನ ಪ್ರಾಂಶುಪಾಲರಾಗಿ, ತೆಲುಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಮತ್ತು ಡೀನ್ ಆಗಿ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ೧೯೭೯ ಮತ್ತು ೧೯೮೦ ರ ನಡುವೆ ವಿಜಯನಗರದ ಮಹಾರಾಜರ ಸರ್ಕಾರಿ ಸಂಗೀತ ಮತ್ತು ನೃತ್ಯ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದರು. ಅವರು ಆಕಾಶವಾಣಿಯಲ್ಲಿ ಭಕ್ತಿ ರಂಜನಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ‘ಸುಬ್ಬಾಶಾಸ್ತ್ರಿ’ (೧೯೬೬) ಚಲನಚಿತ್ರಕ್ಕಾಗಿ ಶ್ರೀರಂಗಂ ಅವರು ರಚಿಸಿದ್ದ ಪ್ರಸಿದ್ಧ ಕನ್ನಡ ಚಲನಚಿತ್ರ ಗೀತೆ ಕೃಷ್ಣನ ಕೊಳಲಿನ ಕರೆ ಐದು ದಶಕಗಳ ನಂತರವೂ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ. == ಪ್ರಶಸ್ತಿಗಳು == ಅವರಿಗೆ ೧೯೯೨ ರಲ್ಲಿ ' ಪದ್ಮಶ್ರೀ ' ಪುರಸ್ಕಾರ ನೀಡಿ ಗೌರವಿಸಲಾಯಿತು ಅವರು ತಿರುಮಲ ತಿರುಪತಿ ದೇವಸ್ಥಾನಗಳ ಆಸ್ಥಾನ ವಿದುಷಿ ಆಗಿದ್ದರು. ಕರ್ನಾಟಕ ಸಂಗೀತ ಗಾಯಕ ಯಾದಯ್ಯ ಮತ್ತು ಅನೇಕರು ಅವರ ಶಿಷ್ಯರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಭಾರತೀಯ ಪರಂಪರೆಯಲ್ಲಿ ಶ್ರೀರಂಗಂ ಗೋಪಾಲರತ್ನಂ ಅವರ ವಿವರ. ಯುಟ್ಯೂಬ್‍ನಲ್ಲಿ ಶ್ರೀರಂಗಂ ಗೋಪಾಲರತ್ನಂ